ಜೀವನ ಸಾಗಿತು ಹನ್ನೆರಡು ಶಿಷ್ಯರೊಂದಿಗೆ
ಗುಡ್ಡ ನೀರು ಮತ್ತು ಕಲ್ಲು ಮುಳ್ಳುಗಳೊಂದಿಗೆ
ಸ್ವರ್ಗ ರಾಜ್ಯದ ಆಶ್ವಸನೆ ನೀಡಲು ಜನರ ಆತ್ಮಗೆ
ಪ್ರಸರಿಸಿ ದೇವರ ಸಾಮ್ರಾಜ್ಯ ಇತರರಿಗೆ
ಜನರ ಕಷ್ಟಕ್ಕೆ ದೈರ್ಯತುಂಬಿ
ಮಾಡಿದರು ಅವರ ರೋಗವಾಸಿ
ಇದನ್ನು ನೋಡಿ ಹರಿಯಿತು ನೀರು ಕಣ್ಣುತುಂಬಿ
ಹೀಗೆ ಯೇಸಾದರು ಜನರಿಗೆ ಸ್ವರ್ಗ ರಾಜ್ಯದ ನಿವಾಸಿ
ಹೊಟ್ಟೆ ಕಿಚ್ಚು ಉರಿಯಿತು ಪರಿಜೇಯರ
ಒಳ್ಳೆಯ ಕೆಲಸ ನೋಡಿ ಯೇಸು ಕ್ರಿಸ್ತರವರ
ತಡೆಯಲಾಗಳಿಲ್ಲ ಹೊಗಳಿಕೆ ಇತರರ
ಕೊನೆಗೆ ಕೊಲೆಯೇ ಅವರ ದೃಢ ನಿರ್ದಾರ
ತಪಿಷ್ಟ ಎಂದು ಕರೆ ತಂದರು ರಾಜರೆದುರು
ಮರಣದಂಡಣೆ ನೀಡಲು ಎಲ್ಲರೆದುರು
ಸುಳ್ಳು ಸಾಕ್ಷಿ ನೀಡಿ ರಾಜನ ಹೊಗಳಿದರು
ಹೀಗೆ ಯೇಸುವನ್ನು ಶಿಲುಬೆಗೇರಿಸಿದರು
ಸಾಯೋನ ನಾವು ಕ್ರಿಸ್ತನಿಗಾಗಿ
ಸತ್ಯವನ್ನು ಮೇಲೆತ್ತಿ ನಮ್ಮ ಜನರಿಗಾಗಿ
ಪ್ರೀತಿಸೋನ ನಮ್ಮ ವೈರಿಯನ್ನು ಯೇಸುವಿಗಾಗಿ
ಹೀಗೆ ನಾವು ಸಾಯೋನ ಸತ್ಯಕ್ಕಾಗಿ
ಕಿರು ಕಾರ್ಮೆಲ್
No comments:
Post a Comment